ಬೆಂಗಳೂರು: ವಿಶ್ವ ಗುಬ್ಬಚ್ಚಿ ದಿನಾಚರಣೆ ವಿಶೇಷವಾಗಿ ಆಚರಣೆ
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ವಿಶ್ವ ಗುಬ್ಬಚ್ಚಿ ದಿನ'ವನ್ನು ವಿಶೇಷವಾಗಿ ಆಚರಿಸಲಾಯಿತು.
“ಬೆಂಗಳೂರಿಗೆ ಮತ್ತೆ ಗುಬ್ಬಚ್ಚಿಗಳ ಚಿಲಿಪಿಲಿ ಧ್ವನಿ ತರುವೆವು” ಎಂಬ ಉದ್ದೇಶದೊಂದಿಗೆ ಸಾರ್ವಜನಿಕರಿಗೆ ಗುಬ್ಬಚ್ಚಿ ಗೂಡುಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರಗು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಂಡಸಿ ಸದಾನಂದ ಸ್ವಾಮಿ (ಅಧ್ಯಕ್ಷರು – ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್, ಸಂಪಾದಕರು – ಭಾರತ ಸಾರಥಿ ಕನ್ನಡ ದಿನಪತ್ರಿಕೆ), ಶ್ರೀಲಕ್ಷ್ಮಿ ಭಟ್ (*ಕಿರಿಯ ನಿರ್ದೇಶಕಿ*, ಯುವ ಕಲಾವಿದೆ ಹಾಗೂ ಲೇಖಕಿ), ಗುರುಪ್ರಸಾದ್ ಕೆ.ಆರ್ (ಐಟಿ ನಿರ್ದೇಶಕರು ಹಾಗೂ ನೈಸರ್ಗಿಕ ಶಿಕ್ಷಣ ತಜ್ಞರು) ಭಾಗವಹಿಸಿದರು.
ಗುಬ್ಬಚ್ಚಿಗಳ ಸಂರಕ್ಷಣೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ Bengaluru Hudugaru Team *ಮತ್ತು InfiWorld Foundation* ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ತಂಡದ ಪದಾಧಿಕಾರಿಗಳಾದ ವಿನೋದ್ ಕರ್ತವ್ಯ, *ಶ್ರೀಶೈಲ ವಿ. ಕೆ* ಸೇರಿದಂತೆ 30ಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.
*ಗುಬ್ಬಚ್ಚಿ ಗೂಡುಗಳನ್ನು ಅಳವಡಿಸುವ ಹಾಗೂ ವಿತರಿಸುವ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ರೇಂಜ್ನ ACF ಶ್ರೀ ಸಂಗಮೇಶ್ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ಗುಬ್ಬಚ್ಚಿ ಗೂಡನ್ನು ಬಳಸಲಾಯಿತು.*
ನಗರದಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಗುಬ್ಬಚ್ಚಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.