ಬೆಂಗಳೂರು, 17, 2025
ಸುಧಾರಿತ ಕಲಿಕೆ ಮತ್ತು ಭವಿಷ್ಯದ ವೃತ್ತಿಪರರು ಮತ್ತು ಉದ್ಯಮಶೀಲರಿಗೆ ಎಐ ಶಕ್ತಿ ಯನ್ನು ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವುದಕ್ಕೆ ಮಾರ್ಗಸೂಚಿಗಳು ಪೂರಕವಾಗಿವೆ
ಬೆಂಗಳೂರು, ಜನವರಿ 17, 2025: ಎನ್ಎಂಎಐಎಂಎಸ್ ಬೆಂಗಳೂರು ಶೈಕ್ಷಣಿಕ ಸಂಶೋಧನೆ ಮತ್ತು ಆಡಳಿತಾತ್ಮಕ ವಲಯಗಳಲ್ಲಿ. ನೈತಿಕ ಮತ್ತು ಜವಾಬ್ದಾರಿಯುತ ತೊಡಗಿಸಿಕೊಳ್ಳುವಿಕೆ ಸಮಗ್ರ ರೂಪುರೇಷೆಯನ್ನು ಪ್ರಕಟಿಸಿದೆ. ಜನರೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಜಿನ್ ಎಐ), ಸಾಮಾಜಿಕ ಮಾಧ್ಯಮ ಮತ್ತು ಸುಸ್ಥಿರತೆಯ ಕುರಿತ ಭವಿಷ್ಯದ ಚಿಂತನೆಗಳುಳ್ಳು ನೀತಿಗಳನ್ನು ರೂಪಿಸಿರುವ ಸಂಸ್ಥೆಯು ಅನ್ನೇಷಣೆ, ಹೊಣೆಗಾರಿಕೆ ಮತ್ತು ಪರಿಸರ ರಕ್ಷಣೆಯಲ್ಲಿ ಹೊಸ ಮಾನದಂಡವನ್ನು ಹುಟ್ಟುಹಾಕುವುದಕ್ಕೆ ಪ್ರಯತ್ನಿಸುತ್ತಿದೆ.
ಎಐನ ಸಾಧ್ಯತೆಯನ್ನು ನೈತಿಕವಾಗಿ ಬಳಸಿಕೊಳ್ಳಲು ಜೆನರೇಟಿವ್ ಎಐ ಬಳಕೆದಾರರ ಮಾರ್ಗಸೂಚಿಗಳು ಮತ್ತು ಪಾಲಿಸಿಯು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಆಡಳಿತಗಾರರಿಗೆ ಸಹಾಯ ಮಾಡುತ್ತದೆ. ನೈತಿಕ ಬಳಕೆ, ಶೈಕ್ಷಣಿಕ ಘನತೆ, ಡೇಟಾ ರಕ್ಷಣೆ ಮತ್ತು ಮಾಹಿತಿಯುಲ್ಮ, ಎಐ ಟೂಲ್ ಅಳವಡಿಕೆಯ ಮೇಲೆ ಈ ಸಿದ್ಧಾಂತವು ಹೆಚ್ಚಿನ ಗಮನ ನೀಡುತ್ತದೆ. ಈ ಕಾರ್ಯತಂತ್ರದಿಂದ ನೈತಿಕ ಎಐ ಬಳಕೆಯಲ್ಲಿ ಮತ್ತು ಬದಲಾಗುತ್ತಿರುವ ಡಿಜಿಟಲ್ ಜಗತ್ತಿನಲ್ಲಿ.. ಸಮುದಾಯವು ಮುಂಚೂಣಿಯನ್ನು ಸಾಧಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಎನ್ಎಎಂಎಐಎಂಎಸ್ ಬೆಂಗಳೂರು ಮಹತ್ವದ ಸ್ಥಾನವನ್ನು ಪಡೆಯುತ್ತದೆ.
ಎನ್ಎಂಎಐಎಂಎಸ್ ಬೆಂಗಳೂರಿನ ನಿರ್ದೇಶಕಿ ಮತ್ತು ಪ್ರೊಫೆಸರ್ ಡಾ. ನಾರಾಯಣಿ ರಾಮಚಂದ್ರನ್ ಮಾತನಾಡಿ, “ನಮ್ಮ ಜೀವನದಲ್ಲಿ ಎಐ ಒಂದು ಮಹತ್ವದ ಭಾಗವಾಗಿದೆ. ಎನ್ಎಂಎಐಎಂಎಸ್ನಲಿ.. ನಾವು ಮಾನವೀಯ ಮೌಲ್ಯಗಳನ್ನು ಆಧರಿಸಿ ನಿರ್ಮಿಸಿದ ಅಡಿಪಾಯದಲ್ಲಿ, ತುತ್ರಜ್ಞಾನವನ್ನು ಸಮ್ಮಿಶ್ರಗೊಳಿಸಿದ ಭವಿಷ್ಯವನ್ನು ರೂಪಿಸುವ ಕೆಲಸ ಮಾಡುತ್ತಿದ್ದೇವೆ, ಈ ಪಾಲಿಸಿಗಳನ್ನು ಅತ್ಯಂತ ಕಾಳಜಿಯಿಂದ ರೂಪಿಸಲಾಗಿದ್ದು, ಡೇಟಾ ಗೌಪ್ಯತೆ, ನೈತಿಕವಾಗಿ ಎಐ ಬಳಕೆ ಮತ್ತು ಹೊಸ ಕಾಲದ ಮಾಧ್ಯಮಗಳಂತಹ ಪ್ರಮುಖಳ ಲಯಗಳನ್ನು ಗಮನದಲ್ಲಿಟ್ಟುಕೊಂಡಿದೆ. ಭವಿಷ್ಯವನ್ನು ಎದುರಿಸಲು ನಮ್ಮ ವಿದ್ಯಾರ್ಥಿಗಳನ್ನು ನಾವು ಸಿದ್ಧಪಡಿಸುತ್ತಿರುವ ಸಮಯದಲ್ಲಿ, ಎಐ ಒದಗಿಸುವ ಹೊಸ ಸಾಧ್ಯತೆಗಳನ್ನು ಬಳಸಿಕೊಳ್ಳುವುದು ಮತ್ತು ಎಐ ಉತ್ತಮ ಬಳಕೆಯನ್ನು ಹೇಗೆ ಮಾಡುವುದು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ,
ಕಲಿಕೆಯ ಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮುಂದಿನ ತಲೆಮಾರಿನ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಲಿ.. ಈ ಉಪಕ್ರಮವು ಪ್ರಮುಖ ಹಂತವಾಗಿದೆ, ಅನ್ವೇಷಣೆಯನ್ನು ಮುನ್ನಡೆಸಲು, ನೈತಿಕ ವರ್ತನೆಗಳನ್ನು ಅಳವಡಿಸಿಕೊಳ್ಳಲು ಮತ್ತು ಪರಿಸರ ರಕ್ಷಣೆಯಲ್ಲಿ ನಾಯಕತ್ವ ವಹಿಸಲು ಮುಂದಿನ ತಲೆಮಾರಿನ ವೃತ್ತಿಪರರು ಮತ್ತು ಉದ್ಯಮಶೀಲರನ್ನು ಪೋಷಿಸುವುದಕ್ಕೆ ನಾವು ಎಷ್ಟು ಬದ್ಧವಾಗಿದ್ದೇವೆ ಎಂಬುದನ್ನು ಈ ನೀತಿಗಳು ಸೂಚಿಸುತ್ತವೆ. ನಮ್ಮ ಸಮುದಾಯಗಳಿಗೆ ಅಗತ್ಯ ಕೌಶಲ್ಯಗಳು ಮತ್ತು ರೂಪುರೇಷೆಗಳನ್ನು ಒದಗಿಸುವ ಮೂಲಕ, ಘನತೆ, ಪರಿಣಿತಿ ಮತ್ತು ತಾದಾತ್ಮದಿಂದ ಮುನ್ನಡೆಯಲು ಅವರಿಗೆ ಸಹಾಯ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.
ಈ ಉಪಕ್ರಮಗಳನ್ನು ಬೆಂಬಲಿಸಲು ಎನ್ಎಂಎಐಎಂಎಸ್ ಉತ್ತಮವಾದ ವ್ಯವಸ್ಥೆಗಳನ್ನು ರೂಪಿಸಿದೆ. ಇದರಲಿ. ತರಬೇತಿ ಕಾರ್ಯಾಗಾರಗಳು, ಕೇಂದ್ರೀಕೃತ ಸಂಪನ್ಮೂಲಗಳು ಮತ್ತು ಮುಕ್ತ ಚರ್ಚೆಗೆ ವೇದಿಕೆಗಳಿವೆ. ಈ ಪ್ರಯತ್ನಗಳು ನಿರಂತರ ಕಲಿಕೆ ಮತ್ತು ಸುಧಾರಣೆಗೆ ನೆರವಾಗುತ್ತವೆ, ಜವಾಬ್ದಾರಿಯುತ ತೊಡಗಿಸಿಕೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂಸ್ಕೃತಿಯನ್ನೂ ಇದು ಪ್ರೋತ್ಸಾಹಿಸುತ್ತಿದೆ.
ಈ ಮಹತ್ವದ ನೀತಿಗಳ ಮೂಲಕ, ಅನ್ವೇಷಣೆಯನ್ನು ಪ್ರೋತ್ಸಾಹಿಸುವುದು, ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುವುದು ಮತ್ತು ಸುಸ್ಥಿರ ಸಮಾನ ಮತ್ತು ಸಂಪದ್ಭರಿತ ಭವಿಷ್ಯಕ್ಕೆ ಕೊಡುಗೆ ನೀಡಲು ಎನ್ ಎಂಎಐಎಂಎಸ್ ಬೆಂಗಳೂರು ಬದ್ಧವಾಗಿದೆ,
ಉತ್ತಮ ಭವಿಷ್ಯಕ, ಅರ್ಥವತ್ತಾದ ಕ್ರಮಗಳನ್ನು ತೆಗೆದುಕೊಳ್ಳಲು ಸಮುದಾಯವನ್ನು ಪ್ರೋತ್ಸಾಹಿಸುವುದಕ್ಕೆ ಸುಸ್ಥಿರತೆ ಪ್ರಮಾಣವಚನವನ್ನೂ ಎನ್ಎಂಎಐಎಂಎಸ್ ಬೆಂಗಳೂರು ಅಳವಡಿಸಿಕೊಂಡಿದೆ. ಈ ಪ್ರಮಾಣವಚನವು ಹೀಗಿದೆ:
"ನನ್ನ ಜೀವನದ ಎಲ್ಲ ಕ್ಷಣಗಳಲ್ಲೂ ಸುರತೆಯನ್ನು ನಾನು ಮುನ್ನಡೆಸುತ್ತೇನೆ, ಸುಸ್ಥಿರತೆ, ಸಮಾನತೆ ಮತ್ತು ಸಂಪದ್ಭರಿತ ವಿಶ್ವವನ್ನು ರೂಪಿಸಲು ನಾನು ಪುಮಾಣ ಮಾಡುತ್ತೇನೆ.
ಉತ್ತಮ ಭವಿಷ್ಯಕ್ಕೆ ಅರ್ಥವತ್ತಾದ ಕ್ರಮಗಳನ್ನು ತೆಗೆದುಕೊಳ್ಳಲು ಸಮುದಾಯವನ್ನು ಪ್ರೋತ್ಸಾಹಿಸುವುದಕ್ಕೆ ಸುಸ್ಥಿರತೆ ಪ್ರಮಾಣವಚನವನ್ನೂ ಎನ್ಎಂಎಐಎಂಎಸ್ ಬೆಂಗಳೂರು ಅಳವಡಿಸಿಕೊಂಡಿದೆ. ಈ ಪ್ರಮಾಣವಚನವು ಹೀಗಿದೆ:
"ನನ್ನ ಜೀವನದ ಎಲ್ಲ, ಕ್ಷಣಗಳಲೂ, ಸುಸ್ಥಿರತೆಯನ್ನು ನಾನು ಮುನ್ನಡೆಸುತ್ತೇನೆ, ಸುಸ್ಥಿರತೆ, ಸಮಾನತೆ ಮತ್ತು ಸಂಪದ್ಭರಿತ ವಿಶ್ವವನ್ನು ರೂಪಿಸಲು ನಾನು ಪ್ರಮಾಣ ಮಾಡುತ್ತೇನೆ.
ನಾನು ಸಂಪನ್ಮೂಲಗಳನ್ನು ರಕ್ಷಿಸುತ್ತೇನೆ, ತ್ಯಾಜ್ಯವನ್ನು ಕಡಿಮೆ ಮಾಡುತ್ತೇವೆ ಮತ್ತು ಜೀವೈವಿಧ್ಯತೆಯನ್ನು ರಕ್ಷಿಸುತ್ತೇನೆ ಹಾಗೂ ವೈವಿಧ್ಯತೆ, ಸಮಾನತೆ ಮತ್ತು ಸಮಗ್ರತೆಯನ್ನೂ ಪ್ರೋತ್ಸಾಹಿಸುತ್ತೇನೆ
ನೈತಿಕ ವರ್ತನೆ, ನೈತಿಕ ಸೈರ್ಯ ಮತ್ತು ಹೊಣೆಗಾರಿಕೆಯಿಂದ ನಾನು ಪಾರದರ್ಶಕವಾಗಿ ಮತ್ತು ಪರಿಣಿತಿಯಿಂದ ವರ್ತಿಸುತ್ತೇನೆ,
ಸಮಗ್ರತೆಯಿಂದ ನಾನು ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುತ್ತೇನೆ ಮತ್ತು ನಮ್ಮ ಗ್ರಹವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ ಮತ್ತು ಹಾಗೆ ಮಾಡುವಂತೆ ಇತರರಿಗೂ ಸ್ಪೂರ್ತಿ ನೀಡುತ್ತೇನೆ".
ಎನ್ಎಂಎಐಎಂಎಸ್ ಬೆಂಗಳೂರು ಸಾಮಾಜಿಕ ಮಾಧ್ಯಮ ನೀತಿಯು ಡಿಜಿಟಲ್ ಮಾಧ್ಯಮದಲ್ಲಿ ಕಾಳಜಿಯಿಂದ ಮತ್ತು ವಿನಯದಿಂದ ಸಂವಾದ ನಡೆಸುವುದನ್ನು ಪ್ರೋತ್ಸಾಹಿಸುತ್ತದೆ.