ಆಗಸ್ಟ್ 20, 2024 

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ವತಿಯಿಂದ 'ವಿಶ್ವಛಾಯಾಗ್ರಾಹಕ ದಿನಾಚರಣೆ' ಆಚರಿಸಲಾಯಿತು. 

   ವಿಶ್ವಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ '25ನೇ ವರ್ಷದ ವಾರ್ಷಿಕ ಪ್ರೊಜನ್ ಮೆಮೊರಿಸ್ 2024 ಛಾಯಾಚಿತ್ರ ಪ್ರದರ್ಶನ' ಸಮಾರೋಪ ಸಮಾರಂಭ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ ಮಹದೇವಪ್ಪ ಛಾಯಾಚಿತ್ರಗಳನ್ನು ವೀಕ್ಷಿಸಿದರು.

  ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಕುಮಾರ್ ಬಿ.ಎನ್, ಉಪಾಧ್ಯಕ್ಷ ಶೈಲೇಂದ್ರ ಭೋಜಕ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕೆ.ಎಸ್, ಖಜಾಂಚಿ ರವೀಂದ್ರ ನಾಯಕ್ ಸಿ.ಹೆಚ್, ಸಮಿತಿಯ ಸದಸ್ಯರುಗಳಾದ ಚೇತನ್ ಶಿವಕುಮಾರ್ ಕೆ, ಸುರೇಶ್ ಪಿ, ಕೌಶಿಕ್ ಜೆ.ಎನ್, ಮುನಿರಾಮೇಗೌಡ (ರವಿ), ಮುರಳಿಕುಮಾರ್ ಕೆ, ಪಾರ್ಥಸಾರಥಿ ಎಂ. ಭಾಗವಹಿಸಿದ್ದರು.