ಆಗಸ್ಟ್ 13, 2024

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ಸ್ಟೇಟ್ ಫಾರ್ಮರ್ಸ್ ಫೋರಂ' ನ ಪದಾಧಿಕಾರಿಗಳು ಪ್ರಥಮ ಸಭೆಯನ್ನು ನಡೆಸಿದರು. 

 ಈ ಸಭೆಯು ಸಿ.ವಿ. ಲೋಕೇಶ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು. 

 ರಾಜ್ಯದಲ್ಲಿನ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಸಿ.ವಿ. ಲೋಕೇಶ್ ಗೌಡ ಅವರು ಮಾಧ್ಯಮಗಳಿಗೆ ತಿಳಿಸಿದರು. 

 ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕರ್ನಾಟಕ ಸ್ಟೇಟ್ ಫಾರ್ಮರ್ಸ್ ಫೋರಂ'ನ ಘಟಕಗಳನ್ನು ಆರಂಭಿಸುವುದು ಆಗಿ ಸಿ.ವಿ. ಲೋಕೇಶ್ ಗೌಡ ಅವರು ತಿಳಿಸಿದರು. 

 ರಾಜ್ಯದಲ್ಲಿರುವ ರೈತರ ಹಿತ ದೃಷ್ಟಿಯಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಕೈಗೊಂಡು ರೈತರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಸಿ.ವಿ. ಲೋಕೇಶ್ ಗೌಡ ಅವರು ತಿಳಿಸಿದರು. 

 ಭವಿಷ್ಯದಲ್ಲಿ ರೈತರ ಸಮಸ್ಯೆಗಳಿಗೆ ಹಾಗೂ ಅಭಿವೃದ್ಧಿಗಾಗಿ ರಾಜ್ಯದಲ್ಲಿನ ಬೇರೆ - ಬೇರೆ ರೈತ ಸಂಘಟನೆಗಳ ಜೊತೆಗೆ ಒಗ್ಗೂಡಿ ಶ್ರಮಿಸುದಾಗಿ ಸಿ.ವಿ. ಲೋಕೇಶ್ ಗೌಡ ಅವರು ಮಾಧ್ಯಮಗಳಿಗೆ ತಿಳಿಸಿದರು.