ಏಪ್ರಿಲ್ 28, 2024

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಸಿಂಫೋನಿ ಸ್ವರ ಪ್ರತಿಷ್ಠಾನ' ವತಿಯಿಂದ "ರಾಜ ಪುನೀತೋತ್ಸವ" ಸಮಾರಂಭ ನಡೆಯಿತು.

 ಖ್ಯಾತ ನಿರ್ಮಾಪಕರಾದ ಚಿನ್ನೇಗೌಡ, ಕನ್ನಡದ ಖ್ಯಾತ ನಟಿ ಭವ್ಯಾ ಅವರು "ರಾಜ ಪುನೀತೋತ್ಸವ" ಸಮಾರಂಭವನ್ನು ಉದ್ಘಾಟಿಸಿದರು. 

 ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ "ರಾಜರತ್ನ ಹಾಗೂ "ಪುನೀತ್ ರತ್ನ" ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. 

 ಈ ಸಮಾರಂಭದಲ್ಲಿ ಹಲವು ಗಾಯಕರು ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. 

ಖ್ಯಾತ ಗಾಯಕರಾದ ಸಿಂಫೋನಿ ಶಿವು ಅವರ ನೇತೃತ್ವದಲ್ಲಿ ಈ ಸಮಾರಂಭ ನಡೆಯುತು.