ಫೆಬ್ರವರಿ 20, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ "ಅಹಿಂದ ಚಿಂತಕರ ವೇದಿಕೆ" ಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

  ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಸೈಬಣ್ಣಾ ಜಮಾದಾರ ಅವರು ಮಾತನಾಡಿದರು.

  ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ(KBJNL) ಹಸನಾಪೂರ ಕಾರ್ಯಪಾಲಕ ಇಂಜಿನಿಯರ್ ಹೊಲಗಾಲುವ ವಿಭಾಗ 2 ಮತ್ತು ಕೃಷ್ಣಾ - ಕಾಡಾ ಭೀಮರಾಯನ ಗುಡಿ ಅದೀನದಲ್ಲಿ ಬರುವ ಮತ್ತು ಉಪ ವಿಭಾಗ ಕಾರ್ಯಾಲಯ ಹಾಗೂ ಉಪ ವಿಭಾಗ ಕಛೇರಿ ಬಾತಾಂಬ್ರ ಬೀದರ್ ಜಿಲ್ಲೆಯ ಹುದ್ದೆ ಸಮೇತ ಆದೇಶವನ್ನು ರದ್ದುಪಡಿಸಿ ಯಥಾ ಸ್ಥಿತಿಯಲ್ಲಿ ಮುಂದುವರಿಸಬೇಕೆಂದು ಸೈಬಣ್ಣಾ ಜಮಾದಾರ ಅವರು ಒತ್ತಾಯಿಸಿದರು.

 ಈ ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಚಿಂತಕರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀನಿವಾಸ ಗುತ್ತೇದಾರ, ಕಾರ್ಯದರ್ಶಿಗಳಾದ ರಮೇಶ ಹಡಪದ, ಖಜಾಂಚಿಯಾದ ಸಂಜು ಹೊಡಲ್ಕರ್, ಉತ್ತರ ಕರ್ನಾಟಕ ಅಧ್ಯಕ್ಷರಾದ ಅಮರೇಶ ಕಾಮನಕೇರಿ ಅವರು ಉಪಸ್ಥಿತರಿದ್ದರು.