ಫೆಬ್ರವರಿ 8, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಅಂಬೇಡ್ಕರ್ ಸೇನೆ"ಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

 ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಪಿ. ಮೂರ್ತಿ ಅವರು ಮಾತನಾಡಿದರು. 

ರಾಜ್ಯ ಸರ್ಕಾರವು 'ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ'ದ ಅಧ್ಯಕ್ಷರಾಗಿ ಶಾಂತಕುಮಾರ ಅವರನ್ನು ನೇಮಿಸಲು ಹೊರಟಿದೆ. ಆದರೆ ಶಾಂತಕುಮಾರ ಅನೇಕ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಹಾಗಾಗಿ ಶಾಂತಕುಮಾರ ಅವರಿಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ'ದ ಅಧ್ಯಕ್ಷರ ಹುದ್ದೆ ನೀಡಬಾರದು ಎಂದು ಪಿ. ಮೂರ್ತಿ ಅವರು ಒತ್ತಾಯಿಸಿದರು.