ಬೆಂಗಳೂರು : ಬೆಂಗಳೂರಿನ ಕೆನ್ ಕಲಾ ಶಾಲೆಯಲ್ಲಿ ಸಮ್ಮಿಲನ‌ ಸಂಸ್ಥೆಯು ಆಯೋಜಿಸಿದ್ದ "ಗಾಯಕ ಎನ್.ಯಲ್ಲಪ್ಪ ಸ್ಮಾರಕ ಪ್ರಶಸ್ತಿ" ಯನ್ನು ಸಾಹಿತಿ, ಪ್ರಾಧ್ಯಾಪಕರಾದ ಡಾ.ರಾಮಲಿಂಗೇಶ್ವರ(ಸಿಸಿರಾ) , ಗಾಯಕಿ ರತ್ನಾ ಜಿ.ನಾಗಭೂಷಣ್, ನಿವೃತ್ತ ಅಂಚೆ ಮಾಸ್ತರ್ ಹೆಚ್.ಆರ್.ಶ್ಯಾಮಸುಂದರ್ ಅವರುಗಳಿಗೆ ನಿವೃತ್ತ ಪೊಲೀಸ್ ಅಧಿಕಾರಿ ವಿ.ರೇಣುಕಾ ಪ್ರಸನ್ನ , ಸಾಹಿತಿ ಸಾ.ಮ.ಶಿವಮಲ್ಲಯ್ಯ, ಕವಿ ಮಾಗನೂರು ಮಹಾಂತೇಶ್ ಪ್ರದಾನ ಮಾಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಕುವರ ಯಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.