ಆಗಸ್ಟ್ 24, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ದಿ ಜರ್ನಿ ಆಫ್ ಬೆಳ್ಳಿ" ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಮಹೇಂದ್ರ ಕುಮಾರ್ ಅವರು ಮಾತನಾಡಿದರು.

"ದಿ ಜರ್ನಿ ಆಫ್ ಬೆಳ್ಳಿ" ಚಿತ್ರವನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿ ಚಿತ್ರೀಕರಣ ಮಾಡಲಾಗಿದೆ. ನಮ್ಮ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು, ಸೆಪ್ಟೆಂಬರ್ 13ರಂದು ಬೆಳ್ಳಿ ಪರದೆಯಲ್ಲಿ ಪ್ರದರ್ಶನವಾಗಲಿದೆ ಎಂದು ಮಹೇಂದ್ರಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದರು. ನಮ್ಮ ಚಿತ್ರವು ಮಕ್ಕಳ ಚಿತ್ರವಾಗಿದ್ದು ಈಗಾಗಲೇ 10ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ ಎಂದು ಮಹೇಂದ್ರ ಕುಮಾರ್ ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಗೌರಿ ಶ್ರೀನಿವಾಸ್ ಅವರು ಮಾತನಾಡಿದರು. "ದಿ ಜರ್ನಿ ಆಫ್ ಬೆಳ್ಳಿ"ವು ಮಕ್ಕಳ ಚಿತ್ರವಾಗಿದ್ದು, ಸೈನ್ಯಕ್ಕೆ ಸೇರಿದ ಯೋಧರೊಬ್ಬರ ಕುಟುಂಬದಲ್ಲಿನ ಹೆಣ್ಣು ಮಗುವಿನ ಭಾವನೆಗಳು ಈ ಚಿತ್ರದಲ್ಲಿ ಅನಾವರಣಗೊಂಡಿವೆ ಎಂದು ಗೌರಿ ಶ್ರೀನಿವಾಸ್ ಅವರು ಹೇಳಿದರು. "ದಿ ಜರ್ನಿ ಆಫ್ ಬೆಳ್ಳಿ" ಚಿತ್ರವು ತಂದೆ - ಮಗಳ ನಡುವಿನ ಪ್ರೀತಿ - ಬಾಂದವ್ಯದ ಬಗ್ಗೆ ತಿಳಿಸುತ್ತದೆ. ಈ ಚಿತ್ರದಲ್ಲಿ ಎಲ್ಲಾ ಪಾತ್ರದಾರಿಗಳು ಅದ್ಭುತವಾಗಿ ಅಭಿನಯಿಸಿದ್ದು, ಸೆಪ್ಟೆಂಬರ್ 13ರಂದು ಬೆಳ್ಳಿ ತೆರೆಗೆ ಬರಲಿದೆ ಎಂದು ಗೌರಿ ಶ್ರೀನಿವಾಸ್ ಅವರು ಮಾಧ್ಯಮಗಳಿಗೆ ತಿಳಿಸಿದರು.