ಮೇ 1, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಉತ್ತಮ ಪ್ರಜಾಕೀಯ ಪಕ್ಷ'ದ ಪ್ರಜೆಗಳು ಪತ್ರಿಕಾಗೋಷ್ಠಿಕೊಂಡಿದ್ದರು. 

 ಪ್ರಸ್ತುತ ಭಾರತೀಯ ಸಮಾಜದಲ್ಲಿ ಅರಾಜಕತೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವ ಆಡುತ್ತಿದೆ ಎಂದು ಪ್ರಜಾಕೀಯ ಪಕ್ಷದ ಪ್ರಜೆಗಳು ಆರೋಪಿಸಿದರು. 

 ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಮೇ 7 ರಂದು ನಡೆಯಲಿದ್ದು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. 

ದೇಶದಲ್ಲಿ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಉತ್ತಮ ಸಮಾಜ ಸೇವೆಗಾಗಿ ಮತದಾರರು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಪ್ರಜಾಕೀಯ ಪಕ್ಷದ ಪ್ರಜೆಗಳು ಮನವಿ ಮಾಡಿದರು.