ಏಪ್ರಿಲ್ 22, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಕರ್ನಾಟಕ ರಾಜ್ಯ ವಹ್ನ್ನಿ ಕುಲ ಕ್ಷತ್ರಿಯ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ವರ್ತೂರ್ ಗಿರೀಶ್ ಅವರು ಮಾತನಾಡಿದರು. 

ವಹ್ನ್ನಿ ಕುಲ ಕ್ಷತ್ರಿಯ ಜಾತಿಗೂ ಮತ್ತು ತಿಗಳ ಜಾತಿಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ವರ್ತೂರು ಗಿರೀಶ್ ಅವರು ಹೇಳಿದರು. ತಿಗಳ ಸಮುದಾಯದವರು ವಹ್ನ್ನಿ ಕುಲ ಕ್ಷತ್ರಿಯ ಸಮುದಾಯದವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ವರ್ತೂರು ಗಿರೀಶ್ ಅವರು ಆರೋಪಿಸಿದರು. ವಹ್ನ್ನಿಕುಲ ಕ್ಷತ್ರಿಯ ಜಾತಿಯು ಐತಿಹಾಸಿಕವಾಗಿದ್ದು, ತನ್ನದೇ ಆದ ಘನತೆ ಗೌರವಗಳನ್ನು ಹೊಂದಿದೆ. ಈ ಬಗ್ಗೆ ಸಾಕಷ್ಟು ಸಾಕ್ಷಿಗಳನ್ನು ವರ್ತೂರ್ ಗಿರೀಶ್ ಅವರು ಬಹಿರಂಗಪಡಿಸಿದರು. ಆದರೂ ಕೂಡ ರಾಜ್ಯದಲ್ಲಿ ವಹ್ನ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕುತ್ತಿಲ್ಲ ಎಂದು ವರ್ತೂರು ಗಿರೀಶ್ ಅವರು ಅಸಮಾಧಾನ ವ್ಯಕ್ತಪಡಿಸಿದರು. 

 ವಹ್ನ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ಪಿಆರ್ ರಮೇಶ್ ಹಾಗೂ ನೆ.ಲ. ನರೇಂದ್ರಬಾಬು ಅವರು ಅನ್ಯಾಯ ಮಾಡುತ್ತಿದ್ದಾರೆ ಎಂದು ವರ್ತೂರು ಗಿರೀಶ್ ಅವರು ಆರೋಪಿಸಿದರು.