December 17, 2023 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್" ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

    ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಡಾ|| ರವೀಂದ್ರ ಶೆಟ್ಟಿ ಬಜಗೋಳಿ ಅವರು ಮಾತನಾಡಿದರು.

   ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ನಾಡಿನ ಅಭಿವೃದ್ಧಿಗೋಸ್ಕರ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸದೆ ಈಗ ನಮ್ಮಿಂದ ಒಂದು ಪಟ್ಟು ಎರಡು ಪಟ್ಟು ದಂಡ ವಸೂಲಿ ಮಾಡುವುದನ್ನು ಕೈಬಿಡಬೇಕು. ಮತ್ತು ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ರಾಜಧನ ಈಗಾಗಲೇ ಸಂದಾಯವಾಗಿರುವುದರಿಂದ ಇದುವರೆಗಿನ ಲೆಕ್ಕಪರಿಶೋಧನೆಯ ಲೆಕ್ಕಗಳನ್ನು ಮುಕ್ತಗೊಳಿಸಿ ಇನ್ನು ಮುಂದೆ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕೆಂದು ಡಾ|| ರವೀಂದ್ರ ಶೆಟ್ಟಿ ಬಚಕೋಳಿಯವರು ಒತ್ತಾಯಿಸಿದರು.