December 6, 2023

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದ ಕುಡೊ ಅಸೋಸಿಯೇಷನ್ ಆಫ್ ಕರ್ನಾಟಕ (KAK) ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  

  ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಶಿಹಾನ್ ಶಬ್ಬೀರ್ ಅಹ್ಮದ್ ಅವರು ಮಾತನಾಡಿದರು. ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯ ವೀರ್ ನರ್ಮದ್ ಸೌತ್ ಗುಜರಾತ್ ಯೂನಿವರ್ಸಿಟಿಯಲ್ಲಿ 15ನೇ ಅಕ್ಷಯ್ ಕುಮಾರ್ ಇಂಟರ್ನ್ಯಾಷನಲ್ ಕುಡೊ (ಮಿಕ್ಸಡ್ ಮಾರ್ಷಲ್ ಆರ್ಟ್ಸ್) ಟೂರ್ನಮೆಂಟ್, 14ನೇ ರಾಷ್ಟ್ರೀಯ ಕುಡೊ ಟೂರ್ನಮೆಂಟ್ ಹಾಗೂ ನಾಲ್ಕನೇ ಕೊಡೊ ಫೆಡರೇಶನ್ ಕಪ್ ಆಯೋಜಿಸಲಾಗಿತ್ತು.

    ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯದಿಂದ 116 ಕ್ರೀಡಾಪಟುಗಳ ತಂಡ ಒಂದು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ 14ನೇ ರಾಷ್ಟ್ರೀಯ ಕುಡೊ ಟೂರ್ನಮೆಂಟ್ ನಲ್ಲಿ 7 ಚಿನ್ನ, 9 ಬೆಳ್ಳಿ, ಹಾಗೂ 19 ಕಂಚು, 4ನೇ ಕುಡೊ ಫೆಡರೇಶನ್ ಕಪ್ ನಲ್ಲಿ 2 ಚಿನ್ನ, 11 ಬೆಳ್ಳಿ 22 ಕಂಚು ಹಾಗೂ 15ನೇ ಅಕ್ಷಯ್ ಕುಮಾರ್ ಇಂಟರ್ನ್ಯಾಷನಲ್ ಕುಡೊ ಟೊರ್ನಮೆಂಟ್ ನಲ್ಲಿ 7 ಚಿನ್ನ, 8 ಬೆಳ್ಳಿ, ಹಾಗೂ 29 ಕಂಚು ಒಟ್ಟಾರೆ 114 ಪದಗಳನ್ನು ಪಡೆದು ರಾಜಕೀಯ ಕೀರ್ತಿ ತಂದಿದ್ದಾರೆ ಎಂದು ಶಿಹಾನ್ ಶಬ್ಬೀರ್ ಅಹ್ಮದ್ ಮಾಧ್ಯಮಗಳಿಗೆ ತಿಳಿಸಿದರು.