ನವೆಂಬರ್ 15, 2023 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾದಿಗ ದಂಡೋರ ಸಂಘಟನೆಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

  ಈ ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಸಂಘಟನೆಯ ಚರ್ಮ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಎಂ.ಡಿ ನಾರಾಯಣ್ ಅವರು ಮಾತನಾಡಿದರು.

   2023 ನವೆಂಬರ್ 7ರಂದು ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡದೆ ಬೆಂಗಳೂರಿನ ಜಯನಗರ ಬಿಟಿಎಂ ಲೇಔಟ್ ರಾಜಾಜಿನಗರ, ಶಿವಾಜಿನಗರದಲ್ಲಿ 35 ಚರ್ಮಕುಟೀರಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು. ತೆರವುಗೊಂಡ 35 ಚರ್ಮ ಕುಟೀರಗಳು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿವೆ ಎಂದು ಎಂಡಿ ನಾರಾಯಣ್ ಅವರು ಮಾಧ್ಯಮಗಳಿಗೆ ತಿಳಿಸಿದರು.

   ತೆರವುಗೊಂಡ ಚರ್ಮಕುಟೀರಗಳ ಮಾಲೀಕರಿಗೆ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕೆಂದು ಎಂ.ಡಿ ನಾರಾಯಣ ಅವರು ಒತ್ತಾಯಿಸಿದರು. ನೋಟಿಸ್ ನೀಡದೆ ಚರ್ಮ ಕುಟೀರಗಳನ್ನು ತೆರವುಗೊಳಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಎಂ.ಡಿ ನಾರಾಯಣ್ ಅವರು ಒತ್ತಾಯಿಸಿದರು.