ಬಿಜೆಪಿ ಪಕ್ಷದ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಮುರುಗೇಶ್ ನಿರಾಣಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಯತ್ನಾಳ್ ರ ಹೇಳಿಕೆಗಳು ಹಾಗೂ ವರ್ತನೆಯಿಂದ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಶಾಸಕ 7 ಸೋತಿದ್ದಾರೆ' ಎಂದು ಗಂಭೀರ ಆರೋಪ ಮಾಡಿದ್ದಾರೆ. 'ಆ ಪುಣ್ಯಾತ್ಮನ ಪಾಪದ ಕೊಡ ತುಂಬಿದೆ' ಎಂದು ಮುರುಗೇಶ್ ನಿರಾಣಿ ಅಬ್ಬರಿಸಿದ್ದಾರೆ.