ಫೈಲ್: ಹಸಿರು ವಾಹನಗಳ ಮೇಳ,ಪ್ಯಾಕೇಜ್

ಮನವಿ: ನಿಯೋಜಿತವಾಗಿದೆ, ಮಧು ಸರ್

ಜಿಲ್ಲೆ/ ವರದಿಗಾರ: ಬೆಂಗಳೂರು ಗ್ರಾಮಾಂತರ, ರಾಮ್ ಪ್ರಸಾದ್.ಕೆ.ಆರ್. 

ಸ್ಲಗ್: ೦೧. ರಾಜ್ಯ ವಾಣಿಜ್ಯ ಮತ್ತು ಕೈಗಾರಿಕ ಮಹಾಸಂಸ್ಥೆಯ ಮುಖ್ಯಸ್ಥ ರಮೇಶ್ ಶಿವಣ್ಣರಿಂದ ಚಾಲನೆ

೦೨. ಭಾರತೀಯ ಹಸಿರು ಶಕ್ತಿ ವಾಹನಗಳಾದ ಪರಿಸರ ಸ್ನೇಹಿ, ವಸ್ತು ಪ್ರದರ್ಶನಕ್ಕೆ ಚಾಲನೆ, ಮೂರು ದಿನಗಳ ಕಾಲ ನಡೆಯುವ ಪ್ರದರ್ಶನ 

೦೩. ಗ್ರೀನ್ ವೆಹಿಕಲ್ ಎಕ್ಸಪೋಗೆ ಮಾದವಾರದ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಚಾಲನೆ

೦೪. ವಾತಾವರಣಕ್ಕೆ ಪೂರಕವಾದ ಹಸಿರು ವಾಹನಗಳ ಬಳಕೆ ಹೆಚ್ಚಾಬೇಕಾಗಿದೆ. 

೦೫. ಬಿಐಇಸಿಯಲ್ಲಿ 3 ದಿನಗಳ 4ನೇ ಅಂತರಾಷ್ಟ್ರೀಯ ಹಸಿರು ಎಲೆಕ್ಟ್ರಿಕ್‌ ವಾಹನಗಳ ಮೇಳ; ಗಮನ ಸೆಳೆಯುತ್ತಿವೆ ಬಸ್, ಕಾರು, ಸಣ್ಣ ಸರಕು ಸಾಗಾಣೆ ವಾಹನಗಳು, ಎಲೆಕ್ಟ್ರಿಕ್ ಸೈಕಲ್ ಗಳು

ಬಿ.ಐ.ಇ.ಸಿ. ಮಾದವಾರ 

ಆಂಕರ್: ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಅಂತರರಾಷ್ಟ್ರೀಯ ಗ್ರೀನ್ ಎನರ್ಜಿ ಎಕ್ಸ್‌ ಪೋ ಆರಂಭವಾಗಿದ್ದು, ದೇಶ ವಿದೇಶಗಳ 138 ಕಂಪನಿಗಳು ಭಾಗವಹಿಸಿವೆ. ಪರಿಸರ ಸ್ನೇಹಿ, ಇಂಧನ ಮಿತವ್ಯಯಕಾರಿ ವಾಹನಗಳ ಲೋಕ ಅನಾವರಣಗೊಂಡಿದೆ.

ಎಲೆಕ್ಟ್ರಿಕ್ ಬಸ್ ಗಳು, ಸಣ್ಣ ಕಾರುಗಳು, ಸರಕು ಸಾಗಾಣೆ ವಾಹನಗಳು, ಎಲೆಕ್ಟ್ರಿಕ್ ಬೈಸಿಕಲ್ ಗಳು ಹೀಗೆ ನಾನಾ ನಮೂನೆಯ ವಾಹನಗಳು ಕೇವಲ ನೋಡಲಷ್ಟೇ ಅಲ್ಲದೇ ಟೆಸ್ಟ್ ಡ್ರೈವ್ ಗೂ ಲಭ್ಯವಿದೆ. ಇದಲ್ಲದೇ ಸ್ಥಳದಲ್ಲಿ ವಾಹನಗಳನ್ನು ಮುಂಗಡ ಕಾಯ್ದಿರಿಸಿದರೆ ರಿಯಾಯಿತಿ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಈ ಮೇಳವನ್ನು ಕರ್ನಾಟಕ ನವೀಕೃತ ಇಂಧನ ಉತ್ಪಾದಕರ ಸಂಘ – ಕ್ರೇಷ್ಮಾ ಮತ್ತು ಭಾರತದ ಪರಿಸರ ಸಂಶೋಧನಾ ಸಂಸ್ಥೆ ಪೆರ್ರಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ವಿಶುವಲ್ಸ್ ಫ್ಲೊ..........

ವಾ// ರಾಜ್ಯ ವಾಣಿಜ್ಯ ಮತ್ತು ಕೈಗಾರಿಕ ಮಹಾಸಂಸ್ಥೆಯ ಮುಖ್ಯಸ್ಥ ರಮೇಶ್ ಶಿವಣ್ಣ ಹಾಗೂ ಮೀಡಿಯಾ ಡೇ ಮಾರ್ಕೆಂಟಿಂಗ್ ವಿಭಾಗದ ನಿರ್ದೇಶಕ ಮೊಹಮದ್ ಮುದಸಿರ್ ವಾಹನ ಮೇಳಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ರಮೇಶ್ ಶಿವಣ್ಣ ಹವಾಮಾನ ಬದಲಾವಣೆ ಗುರಿಗಳನ್ನು ಸಾಧಿಸಲು ಪರಿಸರ ಸ್ನೇಹಿ ವಾಹನಗಳ ಉತ್ಪಾದನೆಗೆ ಸರ್ಕಾರ ಆದ್ಯತೆ ನೀಡಿದ್ದು, ಇದಕ್ಕೆ ಪೂರಕವಾಗಿ ಮೇಳ ಆಯೋಜಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಸಾಗಾಣೆ ವ್ಯವಸ್ಥೆಯ ಭವಿಷ್ಯವಾಗಿದ್ದು, ಬೆಂಗಳೂರು ಜಾಗತಿಕ ವಿದ್ಯುನ್ಮಾನ ವಾನಗಳ ತಾಣವಾಗಿ ಬೆಳೆಯುತ್ತಿದೆ. ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಜನ ಮುಂದಾಗಬೇಕು ಎಂದರು.

ಬೈಟ್: ರಮೇಶ್ ಶಿವಣ್ಣ,

ವಾ// ಮೇಳದಲ್ಲಿ ಕೆ.ಎಲ್.ಹೆಚ್.ರಾಯ ಮಾತನಾಡಿ ರಾಯಚೂರು ಜಿಲ್ಲೆಯ ಲಿಂಗಸಗೂರಿನ ಟಾಸರ್ ಸ್ಕೂಟರ್ ಗಳು, ಕೆಕೆಎಲ್ ಹೈಟೆಕ್ ಸಂಸ್ಥೆಯ ನ್ಯಾನೋ ಗಿಂತ ಸಣ್ಣ ಕಾರುಗಳು, ಸೂಪರ್ ಬೈಕ್ ಗಳು, ಬಗೆ ಬಗೆಯ ಸರಕು ಸಾಗಾಣೆ ವಾಹನಗಳು ಮೇಳದಲ್ಲಿವೆ. ಸರಕು ಸಾಗಾಣೆ ವಾಹನಗಳು ವ್ಯಾಪಾರ, ಕೃಷಿ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವವರಿಗೆ ಸಹಕಾರಿಯಾಗಿದೆ. ಇಎಸ್ಎಸ್ಇಎಲ್ ಸಂಸ್ಥೆಯ ಎಲೆಕ್ಟ್ರಿಕ್ ಸೈಕಲ್ ಗಳು ವಾಹನ ಪ್ರಿಯರ ಸಣ್ಮನ ಸೆಳೆಯುತ್ತಿದೆ. ಇದಕ್ಕೆ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮತ್ತು ವಿಮೆ ಅಗತ್ಯವಿಲ್ಲ. ಹೀಗೆ ಮೇಳ ಹತ್ತು ಹಲವು ಕೌತುಗಳನ್ನು ಮೇಳ ಒಳಗೊಂಡಿದೆ.

ಬೈಟ್ ೦೨. ಕೆ.ಹೆಚ್.ರಾಯ

ವಾ// ಈ ಸಂದರ್ಭದಲ್ಲಿ ಹಲವಾರು ವರ್ತಕರಾದ ಈಶ್ವರ್, ರಾಯ್ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನ ವಿದ್ಯಾರ್ಥಿಗಳಾದ ರಶ್ಮಿತಾ, ರೋಹನ್ ಸಂತಸವನ್ನು ಡಿಡಿ ನ್ಯೂಸ್ ನೊಂದಿಗೆ ಹಂಚಿಕೊಂಡರು. 

ಬೈಟ್:ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು 

ವಾ// ಇದೇ ಸಂದರ್ಭದಲ್ಲಿ ಭಾರತ್ ನ್ಯೂ ಎಜರ್ನಿ ಸಂಸ್ಥೆಯ ಎಸ್ 110 ಎಲೆಕ್ಟ್ರಿಕ್ ಮೋಟಾರ್ ಸೈಕಲ್, ಫರ್ಪೆಟ್ಟೋ, ಬಾಸ್ ಎಸ್150 ಫರ್ಮಾರ್ಮೆನ್ಸ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಗಳನ್ನು ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಬಿಎನ್ ಸಿ ಸಂಸ್ಥೆಯೊಂದಿಗೆ ಜಪಾನಿನ ಹೆಸರಾಂತ ವಾಹನ ಬಿಡಿ ಭಾಗಗಳ ತಯಾರಕರಾದ ಮುಸಾಶಿ ಸೆಮಿಟ್ಸು ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.