ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ - ಸೂಲಿಬೆಲೆ ರಸ್ತೆಯ ಅಗಲೀಕರಣಕ್ಕೆ ಶಾಸಕರಾದ ಶರತ್ ಬಚ್ಚೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಮಾರ್ಗದಲ್ಲಿ

ಭಾರೀ ಗಾತ್ರದ ವಾಹನಗಳ ಸಂಚಾರದಿಂದ ಇತರೆ ವಾಹನಗಳಿಗೆ ಸಂಕಷ್ಟ ಎದುರಾಗಿದೆ. ಜತೆಗೆ ರಸ್ತೆ ಕೂಡ ಕಿರಿದಾಗಿದೆ. ಹಾಗಾಗಿ ರಸ್ತೆಯ ಅಗಲೀಕರಣಕ್ಕೆ ಶಾಸಕರಾದ ಶರತ್ ಬಚ್ಚೇಗೌಡ ಅವರು ಸೂಚಿಸಿದ್ದಾರೆ.