ಬೆಂಗಳೂರು, ಜೂನ್ 1, 2026

ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಐಎಎಸ್‌ ಅಧಿಕಾರಿ ಪಿ.ಎಸ್. ಕಾಂತರಾಜು ಅವರಿಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ಸಂಘದ ನಿಬಂಧಕರಾಗಿ ರಾಜ್ಯ ಸರ್ಕಾರ ಆದೇಶಿಸಿದ್ದ ಹಿನ್ನಲೆಯಲ್ಲಿ ಸೋಮವಾರ ಲಿಡ್ಕರ್ ಸಂಸ್ಥೆಯ ಸಭಾಂಗಣದಲ್ಲಿ ಅವರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಕೆಎಂಎಫ್ ನಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ (ಕ್ರೈಸ್) ಗೆ ವರ್ಗಾವಣೆ ಆಗಿರುವ ಶಿವಸ್ವಾಮಿ ಅವರು ಉಪಸ್ಥಿತರಿದ್ದರು. 

ಈ ವೇಳೆಯಲ್ಲಿ ಪಿ.ಎಸ್. ಕಾಂತರಾಜು ಅವರ ಆಪ್ತರು, ಸಹೋದ್ಯೋಗಿಗಳು ಕಾಂತರಾಜು ಅವರಿಗೆ ಸನ್ಮಾನ ಮಾಡಿದರು.