ಸೆಪ್ಟೆಂಬರ್ 6, 2024

ಬೆಂಗಳೂರಿನ ಜಿ.ಟಿ. ಮಾಲ್ ನಲ್ಲಿ "ಮಾವು - ಬೇವು" ಚಿತ್ರ ನಿರ್ಮಿತಿ ಕುರಿತಾದ 'ಆಕರ ಗ್ರಂಥ' ಲೋಕಾರ್ಪಣೆ ಮಾಡಲಾಯಿತು. 

'ಮಾವು - ಬೇವು' ಪುಸ್ತಕವನ್ನು ಕಾವ್ಯಸ್ಪಂದನ ಪಬ್ಲಿಕೇಶನ್ ಹೊರತಂದಿದೆ. ಕನ್ನಡದ ಖ್ಯಾತ ರಂಗಭೂಮಿ ಕಲಾವಿದ ಕೆ. ಸುಚೇಂದ್ರ ಪ್ರಸಾದ ಅವರ ಸಂಪಾದಿತ ಕೃತಿಯಾಗಿದೆ. 

 ನಿರ್ಮಾಪಕರಾದ ಎಸ್. ರಾಜಶೇಖರ್ ಅವರು ಮಾವು-ಬೇವು ಚಿತ್ರವನ್ನು ನಿರ್ಮಿಸಿದ್ದು, ರಂಗಭೂಮಿ ನಿರ್ದೇಶಕರಾದ ಕೆ ಸುಚೇಂದ್ರ ಪ್ರಸಾದ ಅವರು ನಿರ್ದೇಶನ ಮಾಡಿದ್ದಾರೆ. ಮಾವು- ಬೈವು ಚಿತ್ರದಲ್ಲಿ ಕಲಾವಿದ ನವೀನ್ ಹಾಗೂ ಚೈತ್ರ ಅವರು ಪ್ರಮುಖ ಪಾತ್ರಗಳ ನಟಿಸಿದ್ದಾರೆ. 

 ಇತ್ತೀಚೆಗೆ ಮಾವು - ಬೇವು ಚಿತ್ರಕ್ಕೆ ಅಹಮದಾಬಾದ್ ಫಿಲಂ ಫೆಸ್ಟಿವಲ್ ನಲ್ಲಿ ಸಾಕಷ್ಟು ಪ್ರಶಸ್ತಿಗಳು ಸಿಕ್ಕಿವೆ.

ಮಾವು - ಬೇವು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ದೊಡ್ಡರಂಗೇಗೌಡ, ಕನ್ನಡದ ಖ್ಯಾತ ನಟಿ ತಾರಾ ಅನುರಾಧ, ಅಬಲಾಶ್ರಮ ಸಂಸ್ಥೆಯ ಡಾ. ವಿಜಯಲಕ್ಷ್ಮಿ ದೇಶಮಾನೆ, ಖ್ಯಾತ ಬರಹಗಾರರಾದ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಲಹರಿ ಆಡಿಯೋ ಸಂಸ್ಥೆಯ ವೇಲು ಅವರು ಉಪಸ್ಥಿತಿ ವಹಿಸಿದ್ದರು.