ಆಗಸ್ಟ್ 19, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ' ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ವಿಶ್ವಗುರು ಬಸವಣ್ಣನವರ ಬಗ್ಗೆ "ವಚನ ದರ್ಶನ" ಪುಸ್ತಕದಲ್ಲಿ ಅವಹೇಳನಕಾರಿ ಅಂಶಗಳಿವೆ ಎಂದು ಆರೋಪಿಸಿದರು. ಹಾಗಾಗಿ ರಾಜ್ಯ ಸರ್ಕಾರ ಈ ಪುಸ್ತಕದ ಮೇಲೆ ನಿರ್ಭಂದ ಇರಬೇಕೆಂದು ಒತ್ತಾಯಿಸಿದರು.

 ಈ ಹಿನ್ನಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ "ವಚನ ದರ್ಶನ" ಪುಸ್ತಕ ನಿರ್ಬಂಧಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.