ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರು ಸೋಲುತ್ತಾರೆ - ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ - ಕೆ. ವಿ. ನಂಜುಂಡ ಸ್ವಾಮಿ ವಿಶ್ವಾಸ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ವಿ. ನಂಜುಂಡಸ್ವಾಮಿ ಅವರು ಸ್ಪರ್ಧೆಸಿದ್ದಾರೆ. ಕ್ರಮ ಸಂಖ್ಯೆ 16ರ ಹಲಸಿನ ಹಣ್ಣು ಗುರುತಿಗೆ ಮತ ನೀಡಬೇಕೆಂದು ಕೆ .ವಿ. ನಂಜುಂಡಸ್ವಾಮಿ ಅವರು ಮನವಿ ಮಾಡಿದರು. 

   ಬಿಜೆಪಿ ಪಕ್ಷದಲ್ಲಿ ಸತತವಾಗಿ 25 ವರ್ಷಗಳಿಗೂ ಹೆಚ್ಚು ಕಾಲ ದುಡಿದಿದ್ದೇನೆ, ಆದರೆ ಬಿಜೆಪಿ ಪಕ್ಷದ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಟಿಕೆಟ್ ನೀಡಲಿಲ್ಲ. ಹಾಗಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಕೆ ವಿ ನಂಜುಂಡಸ್ವಾಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.