ಮಾರ್ಚ್ 18, 2024 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ"ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

   ಈ ಪತ್ರಿಕಾಗೋಷ್ಠಿಯಲ್ಲಿ ಯುವಕರು ಘಟಕದ ರಾಜ್ಯಾಧ್ಯಕ್ಷರಾದ ಡಾ. ಟಿ.ಆರ್. ತುಳಸಿರಾಮ್ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ 1999ರಲ್ಲಿ ರಾಜವೀರ ಮದಕರಿ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತವನ್ನು ನಿರ್ಮಿಸಿದ್ದರು. ಆದರೆ ಈ ಮಹಾದ್ವಾರವನ್ನು ಜಿಲ್ಲಾಡಳಿತದವರು ತೆರವುಗೊಳಿಸಿದ್ದಾರೆ ಎಂದು ಡಾ. ಟಿ.ಆರ್. ತುಳಸಿರಾಮ್ ಅವರು ಆರೋಪಿಸಿದರು.

  ಮಾರ್ಚ್ 11 ರಂದು ಭಾನುವಳ್ಳಿ ಗ್ರಾಮದಲ್ಲಿ ರಾಜವೀರ ಮದಕರಿ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತದ ನಾಮಫಲಕವನ್ನು ಜಿಲ್ಲಾಡಳಿತದವರು ತೆರವುಗೊಳಿಸಿದ್ದಾರೆ ಎಂದು ಡಾ. ಟಿ.ಆರ್. ತುಳಸಿರಾಮ್ ಅವರು ಆರೋಪಿಸಿದರು.