ಮಾರ್ಚ್ 4, 2024

   ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಯಂಗ್ ಸ್ಟಾರ್ ಎಂಪವರ್ ಮೆಂಟ್ ಪಾರ್ಟಿ" (YEP) ಸದಸ್ಯರು ಪತ್ಯಕಾಗೋಷ್ಠಿ ಹಮ್ಮಿಕೊಂಡಿದ್ದರು.

   ಈ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಸಿಎಂ ಶಹಭಾಜ್ ಖಾನ್ ಅವರು ಮಾತನಾಡಿದರು.

 ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಯಂಗ್ ಸ್ಟಾರ್ ಎಂಪವರ್ ಮೆಂಟ್ ಪಾರ್ಟಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಯಂಗ್ ಸ್ಟಾರ್ ಮೆಂಟ್ ಪಾರ್ಟಿಯ ಸದಸ್ಯರು ಮತದಾರರಿಗೆ ವಿಶೇಷ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.

 ಯಂಗ್ ಸ್ಟಾರ್ ಎಂಪವರ್ ಮೆಂಟ್ ಪಾರ್ಟಿಯು ತನ್ನ ಪ್ರಣಾಳಿಕೆಯ ಎರಡು ಪ್ರಮುಖ ಯೋಚನೆಗಳನ್ನು ಘೋಷಣೆ ಮಾಡಿದೆ. ಅವುಗಳು ಈ ಕೆಳಕಂಡಂತಿವೆ.

1. ಯಂಗ್ ಸ್ಟಾರ್ ಭಾರತ್ ಖರ್ ಜ್ ಸೆ ಅಜಾದಿ ಯೋಜನೆ 

2. ಯಂಗ್ ಸ್ಟಾರ್ ಭಾರತ್ ಸ್ಕೂಲ್ ಫೀಸ್ ಆಜಾದಿ ಯೋಜನೆ 

   ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದೆಲ್ಲೆಡೆ ಯಂಗ್ ಸ್ಟಾರ್ ಎಂಪವರ್ ಮೆಂಟ್ ಪಾರ್ಟಿಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

 ರಾಷ್ಟ್ರೀಯ ಅಧ್ಯಕ್ಷರಾದ ಸಿಎಂ ಶಹಭಾಜ್ ಖಾನ್ ಅವರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.