ಫೆಬ್ರವರಿ 14, 2024 

   ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು " ಕರ್ನಾಟಕ ರಾಜ್ಯ ರೈತ ಸಂಘ (ರಿ) ರೈತ ಬಣ"ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಕೊಂಡಿದ್ದರು. 

  ಈ ಪತ್ರಿಕಾಗೋಷ್ಠಿಯಲ್ಲಿ ರಾಜಾಧ್ಯಕ್ಷರಾದ  ಇಎನ್ ಕೃಷ್ಣೆಗೌಡ ಇಂಗಲಗುಪ್ಪೆ ಅವರು ಮಾತನಾಡಿದರು.

   ರಾಜ್ಯ ಸರ್ಕಾರವು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಫೆಬ್ರವರಿ 17ರಂದು "ಬೆಂಗಳೂರು ಚಲೋ ಕಾರ್ಯಕ್ರಮ" ಹಮ್ಮಿಕೊಳ್ಳಲಾಗಿದೆ ಎಂದು ಈ ಎನ್ ಕೃಷ್ಣೇಗೌಡರು ಮಾತುಗಳಿಗೆ ತಿಳಿಸಿದರು.

 ಈ ಪ್ರತಿಭಟನ ಕಾರ್ಯಕ್ರಮದಲ್ಲಿ ರಾಜ್ಯದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವುದಾಗಿ ತಿಳಿಸಿದರು. 

   ಈ ಪತ್ರಿಕಾಗೋಷ್ಠಿಯಲ್ಲಿ ರೈತ ಯುವ ನಾಯಕರಾದ ಚಂದ್ರಶೇಖರ್ ಭೋವಿಯವರು ಉಪಸ್ಥಿತರಿದ್ದರು.