ನವೆಂಬರ್ 20, 2023 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಅಗ್ರವಾಲ್ ಸಮಾಜ ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಗೋಯೆಂಕ ಅವರು ಪತ್ರಿಕಾಗೋಷ್ಠಿ ಆಯೋಜಿಸಿದ್ದರು.

    ಕೋವಿಡ್ ಸಂದರ್ಭದಲ್ಲಿ ಸಮಾಜ ಸೇವೆ ನೆಪದಲ್ಲಿ ಅಗ್ರವಾಲ್ ಸಮಾಜ ಕರ್ನಾಟಕದಿಂದ ಸುಮಾರು 10 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಪ್ರಶಾಂತ್ ಗೋಯೆಂಕ ಅವರು ಆರೋಪಿಸಿದರು.

    ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೋವಿಡ್ 2020ರ ಸಂದರ್ಭದಲ್ಲಿ ಸಮಾಜ ಸೇವೆ ನೆಪದಲ್ಲಿ ಅಗ್ರವಾಲ್ ಸಮಾಜದ ಮುಖಂಡರು ಜನರಿಂದ ಕೋಟ್ಯಂತರ ರೂಪಾಯಿ ಹಣವನ್ನು ಚಂದಾ ರೂಪದಲ್ಲಿ ಪಡೆದಿದ್ದಾರೆ. ಆದರೆ ತಮ್ಮ ಸಂಘದ ಲೆಕ್ಕಪತ್ರದಲ್ಲಿ ಕನಿಷ್ಠ ಮೊತ್ತದ ಲೆಕ್ಕ ತೋರಿಸಿ ಸರ್ಕಾರಕ್ಕೆ ವಂಚನೆ ಎಸಗಿದ್ದಾರೆ ಎಂದು ಪ್ರಶಾಂತ್ ಗೋಯೆಂಕ ಅವರು ಆರೋಪಿಸಿದರು. ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಶಾಂತ್ ಗೋಯೆಂಕ ಅವರು ಒತ್ತಾಯಿಸಿದರು.