ಮಣಿಪುರದಲ್ಲಿನ ಮಹಿಳೆಯರ ಬೆತ್ತಲೆ ಮೆರವಣಿಗೆ & ಅತ್ಯಾಚಾರ ಪ್ರಕರಣವನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ. ಎನ್. ಮೂರ್ತಿ ಅವರು ಕಟುವಾಗಿ ಖಂಡಿಸಿದರು. ಜತೆಗೆ ಕೇಂದ್ರ ಸರ್ಕಾರವು  ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಆಡಳಿತವನ್ನು ಈ ಕೂಡಲೇ ಜಾರಿಗೊಳಿಸಬೇಕೆಂದು ಎನ್‌. ಮೂರ್ತಿ ಅವರು ಒತ್ತಾಯಿಸಿದರು.