ರೋಣ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿಂದು ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಪ್ರತ್ಯೇಕವಾಗಿ ತಾಲೂಕಿನಲ್ಲಿ ಸಭೆ ಸಮಾರಂಭ ಮಾಡುವುದಕ್ಕೆ ಕಾರ್ಮಿಕರಿಗೆ ಕಲ್ಯಾಣ ಭವನ ಹಾಗೂ ಸಮುದಾಯ ಭವನ ಮಂಜೂರ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ 103 ಕ್ಯಾಟಗೇರಯಲ್ಲಿ ಇರುವ ಸಘಂಟಿತ ಕಾರ್ಮಿಕರು ಮತ್ತು 3 ಕ್ಯಾಟಗರಯಲ್ಲಿ ಕಾರ್ಮಿಕರಿಗೆ ಇ.ಎಸ್.ಐ. ವ್ಯಾಪ್ತಿಗೆ ಒಳಪಡಿಸಬೇಕು.ಹಾಗೂ ಮುಂಬರುವ ಬಜೆಟ್ ನಲ್ಲಿ ಆರೋಗ್ಯ,ಶಿಕ್ಷಣ ಪ್ರತ್ಯೇಕ ನಿಧಿ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕಾಧ್ಯಕ್ಷ ಬಸವರಾಜ ಕುರಿ ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹನಮಂತ ಕುರಿ,ಮಂಜುನಾಥ ಪೂಜಾರ,ಸುಲೇಮಾನ ಇಟಗಿ.ಬುಡ್ನೇಸಾಬ ಚಿನ್ನೂರು,ದಾವಲಸಾಬ ಕೋಲ್ಕಾರ.ರಫೀಕ್ ಬಾಡಿನ,ವಿರೇಶ ಕಲಹಾಳ,ವಿಷ್ಣು ಕಮ್ಮಾರ, ವೀರಪ್ಪ ಮಾದರ,ಹನಮಂತ ವಾಲಿಕಾರ,ಶೋಭಾ ರಾಮಣ್ಣವರ,ಸವಿತಾ ಮೆಣಸಗಿ,ಬಾಳಪ್ಪ ಭಜೇಂತ್ರಿ,ವಿರೇಶ ಹೂಗಾರ,ಬಸವರಾಜ ಕಿರಟಗೇರಿ, ಮಮ್ತಾಜಬಿ ರೋಣದ,ಮಮ್ತಾಜಬಿ ಹುಸೇನಬಾವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.