ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಕಚೇರಿ ಕೃಷ್ಣಾದಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ ಕೆಲವು ಅಧಿಕಾರಿಗಳು ಕೇವಲ ವರ್ಗಾವಣೆ ಮಾಡಲು ₹30 ಲಕ್ಷ ಲಂಚ ಕೇಳುತ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಅಮಾಯಕ ಜನರಿಂದ ಲಕ್ಷ ಲಕ್ಷ ಲಂಚ ಲೂಟಿ ಮಾಡಲು ಪ್ರತಿ ಇಲಾಖೆಯಲ್ಲಿಯೂ ಸಿಂಡಿಕೇಟ್ ಕಮಿಟಿಗಳು ನಿರ್ಮಾಣವಾಗಿವೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.