ದಾವಣಗೆರೆ ನಗರದ ಹೊರವಲಯದಲ್ಲಿ 'ವಂದೇ ಭಾರತ್' ರೈಲಿಗೆ ಕಲ್ಲು ತೂರಿದ ಘಟನೆ ನಡೆದಿದೆ. ವಂದೇ ಭಾರತ್ ರೈಲು ಧಾರವಾಡದಿಂದ ಬೆಂಗಳೂರಿಗೆ ಬರುತ್ತಿದ್ದಾಗ ದುಷ್ಕರ್ಮಿಗಳು ರೈಲಿಗೆ ಕಲ್ಲು ತೂರಿದ್ದಾರೆ. ಕಲ್ಲು ತೂರಾಟದಿಂದ ರೈಲಿನ ಗಾಜಿಗೆ ಹಾನಿಯಾಗಿದೆ.  ರೈಲ್ವೇ ಪೊಲೀಸರು ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.