'ಮುಸ್ಲಿಂ ಸಮುದಾಯದವರು ನನ್ನಿಂದ ಹಣ, ಉಡುಗೊರೆ ಪಡೆದು ವೋಟ್ ಹಾಕಲಿಲ್ಲ, ನನ್ನ ಸೋಲಿಗೆ ಮುಸ್ಲಿಂ ಸಮುದಾಯದವರು ಕಾರಣ' ಎಂಬ ಎಂಟಿಬಿ ನಾಗರಾಜ್ ಅವರ ಹೇಳಿಕೆ ಕುರಿತಾಗಿ ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರಿಗೆ ದೂರು ಸಲ್ಲಿಕೆಯಾಗಿದೆ. ವಕೀಲರಾದ ಮಹೇಶ್ ಎಂಬುವರು ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ವಿರುದ್ಧ ದೂರು ಸಲ್ಲಿಸಿದ್ದಾರೆ.