ಬೆಂಗಳೂರಿನ ಜೀವನ್ ಭೀಮಾ ನಗರದ ಕೋಡಿಹಳ್ಳಿ ಅಪಾರ್ಟ್‌ಮೆಂಟ್ ನಲ್ಲಿ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ ಯುವತಿಯ ಕೊಲೆಯಾಗಿದೆ. ಆಕಾಂಕ್ಷಾ ಬಿದ್ಯಾದರ್ (23)ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.

ಕೆಲ ವರ್ಷಗಳಿಂದ ಆಕಾಂಕ್ಷಾ ಹಾಗೂ ಕೊಲೆ ಆರೋಪಿ ಅರ್ಪಿತ್ ಕೋಡಿಹಳ್ಳಿಯ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದರು. ಮೊದಲು ಒಂದೇ ಕಂಪನಿಯ ಉದ್ಯೋಗಿಗಳಾಗಿದ್ದರು. ಆದರೆ ಅರ್ಪಿತ್ ಇತ್ತೀಚೆಗೆ ಹೈದರಾಬಾದ್ ನ ಕಂಪನಿಗೆ ಸೇರಿದ್ದ. ಇದರಿಂದ ಇಬ್ಬರು ನಡುವೆ ಜಗಳ ಶುರುವಾಗಿದೆ. 

ಸದ್ಯ ದೆಹಲಿ ಮೂಲದ ಕೊಲೆ ಆರೋಪಿ ಅರ್ಪಿತ್ ಪರಾರಿಯಾಗಿದ್ದಾನೆ. ಆಕಾಂಕ್ಷಾ ಮೃತದೇಹದ ಪಕ್ಕದಲ್ಲಿ ಮೊಬೈಲ್ ಫೋನ್ ಇಟ್ಟು ಅರ್ಪಿತ್ ಪರಾರಿಯಾಗಿದ್ದಾನೆ. ಅರ್ಪಿತ್ ಗಾಗಿ ಜೀವನ್ ಭೀಮಾನಗರದ ಪೊಲೀಸರು ಶೋಧ ಕಾರ್ಯ ಕೈಕೊಂಡಿದ್ದಾರೆ. ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.