ಬೆಂಗಳೂರು, ಫೆಬ್ರವರಿ 6, 2026: ಬೈಕ್ ಟ್ಯಾಕ್ಸಿಯಿಂದ ಆಟೋ, ಕಾರ್ ಹಾಗೂ ಗುಡ್ಸ್ ವಾಹನದ ಚಾಲಕರಿಗೆ ತೊಂದರೆ ಯಾಗುತ್ತಿದ್ದೂ*ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್* ಹಾಗೂ *ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್* ಗಳು ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿವೆ. ಮೋಟಾರ್ ವಾಹನಗಳ ಕಾಯ್ದೆ, 1988ರಲ್ಲಿ “ಬೈಕ್ ಟ್ಯಾಕ್ಸಿ”ಗೆ ಯಾವುದೇ ಸ್ಪಷ್ಟ ಹಾಗೂ ನೇರ ಅನುಮತಿ ಇಲ್ಲ. ಸುರಕ್ಷತಾ ವ್ಯವಸ್ಥೆಗಳಿಲ್ಲದ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಪ್ರಯಾಣಿಕರ ಸಾರಿಗೆಗೆ ಬಳಸುವುದು ಸಾರ್ವಜನಿಕ ಜೀವಭದ್ರತೆಗೆ ಗಂಭೀರ ಅಪಾಯಕಾರಿಯಾಗಿದೆ ಎಂದು ಚಾಲಕರ ಸಂಘಟನೆ ಗಳು ತಿಳಿಸಿದ್ದಾವೆ. ಅಪಘಾತ ಅಂಕಿ ಅಂಶಗಳನ್ನೇ ಗಮನಿಸಿದರೂ, ಬೈಕ್ ಟ್ಯಾಕ್ಸಿ ಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎನ್ನುವುದು ಸ್ಪಷ್ಟವಾಗಿದೆ. ಪರವಾನಗಿ ಪಡೆಯುವುದು ಮೂಲಭೂತ ಹಕ್ಕು ಅಲ್ಲ ಎಂಬುದನ್ನು ಮಾನ್ಯ ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದ್ದು, ಸಾರ್ವಜನಿಕ ಹಿತಾಸಕ್ತಿಗಾಗಿ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟಾಗುವುದರ ಜೊತೆಗೆ, ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಳವಾಗುವ ಭೀತಿ ಇದೆ. ಅಲ್ಲದೆ, ನಿಯಮಾನುಸಾರ ಪರವಾನಗಿ ಪಡೆದು ತೆರಿಗೆ ಕಟ್ಟುವ ಆಟೋ–ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೂ ಭಾರೀ ಹೊಡೆತ ಬೀಳಲಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಚಾಲಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಚಾಲಕ ಸಂಘಟನೆಗಳು ಎಚ್ಚರಿಸಿವೆ. ಈ ಕೂಡಲೇ,ಬೈಕ್ ಟ್ಯಾಕ್ಸಿ ಯ ವಿಚಾರವಾಗಿ ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಬೇಕು. ಪತ್ರಿಕಾ ಪ್ರಕಟಣೆ ಯಲ್ಲಿ *ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸ್ನೇಹಜೀವಿ ಸಂತೋಷ್ ಕುಮಾರ್, ಹಾಗೂ ರಾಜ್ಯ ಪ್ರಧಾನಕಾರ್ಯದರ್ಶಿ ರಾಜು ಕನ್ನಡಿಗ ಅವರು ತಿಳಿಸಿದ್ದಾರೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ત્રણ મહિનાથી ડુંગળી, નાફેડની ખરીદીએ ખેડૂતોને વધુ નિરાશ કર્યા
કેન્દ્રીય કૃષિ મંત્રાલયના જણાવ્યા અનુસાર, 2021-22 દરમિયાન દેશમાં 30 મિલિયન મેટ્રિક ટનથી વધુ...
ધ્રાંગધ્રાના જનતા જીન ગ્રાઉન્ડ ખાતે ક્રિકેટ ટુર્નામેન્ટ યોજાઈ પુર્વે કેબિનેટ મંત્રી આઇ કે જાડેજા તથા ધારાસભ્ય ઉપસ્થિત રહ્યા,,
સુરેન્દ્રનગર જીલ્લા ના ધ્રાગધા શહેરના જનતા જીન ગ્રાઉન્ડ ખાતે ક્રિકેટ ટુર્નામેન્ટ યોજાઈ હતી આ...
17 दिसंबर को राजस्थान आएंगे PM मोदी, ERCP का करेंगे शिलान्यास; CM भजनलाल करेंगे ये बड़ा एलान!
प्रधानमंत्री नरेन्द्र मोदी की 17 दिसंबर को दादिया में होने वाली सभा में पीएम ईआरसीपी परियोजना का...
Yamuna Expressway पर फिर बढ़ा टोल टैक्स, जानिए अब तक कितना महंगा हो चुका है सफर? | Aaj Tak
Yamuna Expressway पर फिर बढ़ा टोल टैक्स, जानिए अब तक कितना महंगा हो चुका है सफर? | Aaj Tak
रुग्ण हक्क संरक्षण समितीच्या वतीने मिर्झापूर गावात आयोजित भव्य रक्तदान शिबीरात 35 रक्तदात्यांनी केले रक्तदान
परभणी दिनांक 9 सप्टेंबर रोजी
रुग्ण हक्क संरक्षण समिती जिल्हा परभणी च्या वतीने परभणी...