ಬೆಂಗಳೂರು, ಏಪ್ರಿಲ್ 4, 2025
ಕಮ್ಮವಾರಿ ಸಂಘಂ (ರಿ) - 1952 ರ ಅಡಿಯಲ್ಲಿರುವ ಪ್ರತಿಷ್ಠಿತ ತಾಂತ್ರಿಕ ಉನ್ನತ ಶಿಕ್ಷಣ ಸಂಸ್ಥೆಯಾದ ಕೆಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಎಸ್ಐಟಿ), AICTE ಅನುಮೋದನೆ, VTU ಸಂಯೋಜನೆ, NBA ಮಾನ್ಯತೆ ಮತ್ತು NAAC A+ ಶ್ರೇಣಿಯೊಂದಿಗೆ, ತನ್ನ ನೂತನ 'ಬೆಳ್ಳಿ ಹಬ್ಬದ ಸಭಾಂಗಣ' ಉದ್ಘಾಟನೆಯಾಯಿತು.
ಈ ಅತ್ಯಾಧುನಿಕ ಸೌಲಭ್ಯವು 800 ಆಸನ ಸಾಮರ್ಥ್ಯ ಮತ್ತು ವಿಶ್ವ ದರ್ಜೆಯ ಅಡಿಯೋ-ವಿಶುವಲ್ ಉಪಕರಣಗಳನ್ನು ಹೊಂದಿದ್ದು, ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಬಳಸಲಾಗುತ್ತದೆ.
ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಮುಖ್ಯ ಅತಿಥಿ ಶ್ರೀ ರಾಮಲಿಂಗಾ ರೆಡ್ಡಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಾಜಿ ಸಚಿವರಾದ ಶ್ರೀಕಟ್ಟಾ ಸುಬ್ರಮಣ್ಯ ನಾಯ್ಡು, ಮತ್ತು ಕಮ್ಮವಾರಿ ಸಂಘದ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.
ಕಮ್ಮವಾರಿ ಸಂಘದ ಅಧ್ಯಕ್ಷರಾದ ಶ್ರೀ ಆರ್. ರಾಜಗೋಪಾಲ್ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಕಮ್ಮವಾರಿ ಸಂಘದ ಗೌರವ ಕಾರ್ಯದರ್ಶಿ ಶ್ರೀ ಆರ್. ಲೀಲಾಶಂಕರ್ ರಾವ್ ಮತ್ತು ಕಮ್ಮವಾರಿ ಸಂಘದ ಖಜಾಂಚಿ ಶ್ರೀಟಿ. ನೀರಜಾಕುಲು ನಾಯ್ಡು ಸೇರಿದಂತೆ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೆಎಸ್ಬಿಐ ಸಿಇಒ ಡಾ. ಕೆ. ವಿ. ಎ. ಬಾಲಾಜಿ ಮತ್ತು ಕೆಎಸ್ಐಟಿ ಪ್ರಾಂಶುಪಾಲರು/ನಿರ್ದೇಶಕರಾದ ಡಾ. ದಿಲೀಶ್ ಕುಮಾರ್ ಕೆ ಕೂಡ ಉಪಸ್ಥಿತರಿದ್ದರು.