ಜನವರಿ 10, 2025

   ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ (ರಿ) ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಪ್ರಮೋದ ಮಧ್ವರಾಜ್ ಅವರು ಮಾತನಾಡಿದರು. 

ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸಿಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜನವರಿ 14, 15ರಂದು 'ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ' ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಮೋದ ಮಧ್ವರಾಜ್ ಅವರು ತಿಳಿಸಿದರು. 

ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ 7ನೇ ಅಂಬಿಗರ ತರಣ ಸಂಸ್ಕೃತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.

ಕಾರ್ಯಕ್ರಮದ ವಿಶೇಷತೆಗಳು:

ನೇತೃತ್ವ ಜಗದ್ಗುರು ಪೂಜ್ಯಶ್ರೀ ಶಾನ್ತಭೀಷ್ಮ ಚೌಡಯ್ಯ ಪೀಠಾಧ್ಯಕ್ಷರು ಶ್ರೀ ನಿಜಶರಣ ಅಂಬಿಗರ ಇನ್ನಷ್ಟು ನೋಡಿ ತಾಲ್ಲೂಕು ಹಾವೇರಿ

ಮುಖ್ಯ ಅತಿಥಿಗಳು: ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು

 * ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಅಂಬಿಗರ ಚೌಡಯ್ಯನವರ ತೊಟ್ಟಿಲು ಉತ್ಸವ ಹಾಗೂ ಮೂಲ ಐಕ್ಯ ಮಂಟಪದ ಪೂಜೆ

'ಸಮಾಜ ಸೇವೆ: ರಕ್ತದಾನ ಶಿಬಿರ

ಸಾಮಾಜಿಕ ಕಾರ್ಯಕ್ರಮಗಳು : ಸರಳ ಸಾಮೂಹಿಕ ವಿವಾಹ ಮಹೋತ್ಸವ

ಸಾಂಸ್ಕೃತಿಕ ಕಾರ್ಯಕ್ರಮಗಳು: ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ, ಪ್ರಪ್ರಥಮ ಐತಿಹಾಸಿಕ ಗಂಗಾರತಿ

ಕಾರ್ಯಕ್ರಮ

* ಸಾಹಿತ್ಯಕ ಕಾರ್ಯಕ್ರಮ: ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗ್ರಂಥ ಬಿಡುಗಡೆ.

ಹಾಗಾಗಿ ಈ ಕಾರ್ಯಕ್ರಮವು ತಮ್ಮ ಸಹಕಾರ ಪ್ರಚಾರ ಹಾಗೂ ಪ್ರಚಾರದಿಂದ ಸಮಸ್ತ ಕರ್ನಾಟಕದ ಜನತೆಗೆ ಹಾಗೂ ಅಂಬಿಗ, ಮೀನುಗಾರ, ಕಬ್ಬಲಿಗ ಹಾಗೂ ಇನ್ನಿತರ ಮೀನುಗಾರ ಸಮಾಜದ ಬಂಧುಗಳು ಆಗಮಿಸಲು ಮಾಧ್ಯಮದಿಂದ ಆಹ್ವಾನಿಸಿ ಕಾರ್ಯಕ್ರಮವನ್ನು ಯಶಸ್ತಿ ಗೊಳಿಸಲು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಪ್ರಮೋದ್ ಮಧ್ವರಾಜ್ ಅವರು ಹೇಳಿದರು.