ಆಗಸ್ಟ್ 28, 2024

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ'ದ ವತಿಯಿಂದ "ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ" ಬೃಹತ್ ಪ್ರತಿಭಟನೆ ನಡೆಯಿತು. 

 ಈ ಪ್ರತಿಭಟನೆಯಲ್ಲಿ 'ಭೀಮ ಸೇನೆ'ಯ ರಾಜ್ಯಧ್ಯಕ್ಷರಾದ ಶಂಕರ್ ಅವರು ಮಾತನಾಡಿದರು. 

 ರಾಜ್ಯದ ಕಾಂಗ್ರೆಸ್ ಸರ್ಕಾರ ದಲಿತರ ಹೆಸರಲ್ಲಿ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಮೀಸಲಿಟ್ಟು ಹಣವನ್ನು ಬೇರೆ ಬೇರೆ ಯೋಜನೆಗಳಿಗೆ ಖರ್ಚು ಮಾಡುತ್ತಿದ್ದಾರೆ ಎಂದು ಶಂಕರ್ ಅವರು ಆರೋಪಿಸಿದರು. 

ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂದು ಶಂಕರ್ ಅವರು ಆಕ್ರೋಶ ವ್ಯಕ್ತಪಡಿಸಿದರು. 

  ಈ ಪ್ರತಿಭಟನೆಯಲ್ಲಿ ನಟ ಚೇತನ್ ಅಹಿಂಸಾ, ರಾಜ್ಯ ಸಂಚಾಲಕರಾದ ಭಾಸ್ಕರ್, ರಮೇಶ್ ಅವರನ್ನು ಸೇರಿದಂತೆ ಸಾವಿರಾರು ಮಂದಿ ಸದಸ್ಯರು ಉಪಸ್ಥಿತರಿದ್ದರು.