ಮಾರ್ಚ್ 9, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿ ಅಧ್ಯಕ್ಷರಾದ ಎಸ್. ನಟರಾಜ್ ಶರ್ಮ ಅವರು ಮಾತನಾಡಿದರು.

 ರಾಜ್ಯ ಸರ್ಕಾರವು 'ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ - 2021' ರದ್ದುಪಡಿಸಿದೆ. ಆದರೂ ಸಹ ಕೆಲವು ಖಾಸಗಿ ಬೈಕ್ ಕಂಪನಿಯ ಸದಸ್ಯರು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್. ನಟರಾಜ್ ಶರ್ಮ ಅವರು ಒತ್ತಾಯಿಸಿದರು.