ಫೆಬ್ರವರಿ 15, 2024 

   ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಭಾರತೀಯ ಬೌದ್ಧ ಮಹಾಸಭಾ - ದಕ್ಷಿಣ ಕರ್ನಾಟಕ ರಾಜ್ಯ ಶಾಖೆ"ಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಈ ಪತ್ರಿಕಾಗೋಷ್ಠಿಯಲ್ಲಿ ರಾಜಾಧ್ಯಕ್ಷರಾದ ಎಂ. ಸಿ. ಶಿವರಾಜ್ ಅವರು ಮಾತನಾಡಿದರು.

 ಬೌದ್ಧ ಸಮುದಾಯದ ಜನರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು "ಕರ್ನಾಟಕ ರಾಜ್ಯ ಬೌದ್ಧರ ಅಭಿವೃದ್ಧಿ ಮಂಡಳಿ" ಸ್ಥಾಪನೆ ಮಾಡಬೇಕೆಂದು ಎಂ. ಸಿ ಶಿವರಾಜ್ ಅವರು ಒತ್ತಾಯಿಸಿದರು.