ಬೆಂಗಳೂರು : ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡಿನ ಅತ್ತಿಗುಪ್ಪೆ ಮತ್ತು ದ್ವಾರಕನಗರ ಬಡಾವಣೆಗಳಿಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕರಾದ ಎಂ.ಕೃಷ್ಣಪ್ಪರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಜಯನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆನಂದ್, ಕಾಂಗ್ರೆಸ್ ಮುಖಂಡರಾದ ಅರ್.ಚಂದ್ರಪ್ಪ,ಸ್ಥಳಿಯ ಮುಖಂಡರಾದ ಕಾಂತರಾಜ್, ಮಾದಯ್ಯ, ಹರೀಶ್ ದೊಡ್ಡಣ್ಣ, ಸಂದೀಪ, ಬೀರಪ್ಪ, ಮುದ್ದಣ್ಣ, ಹನುಮಂತಪ್ಪ,ಶ್ರೀ ಶ್ರೀನಿವಾಸ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸವಿತಾ, ಮುಖಂಡರಾದ ಶುಭ, ಆಶಾ ಹಾಗೂ ಸ್ಥಳಿಯ ಮುಖಂಡರು ಹಾಜರಿದ್ದರು.