ರಕ್ಷಾ ಫೌಂಡೇಷನ್‌ ನಿಂದ ೧.೫ ಲಕ್ಷ ಉಚಿತ ನೋಟ್‌ ಬುಕ್‌, ಕಲಿಕಾ ಪರಿಕರಗಳ ವಿತರಣೆ

ಜಯದೇವ ಹೃದ್ರೋಗ ಸಂಸ್ಥೆಯಿಂದ ೫೨ ಲಕ್ಷ ಮಂದಿಗೆ ಚಿಕಿತ್ಸೆ ನೀಡಿ ದಾಖಲೆ ನರ‍್ಮಾಣ ; ಡಾ. ಮಂಜುನಾಥ್‌

ಬೆಂಗಳೂರು, ಜೂ, ೨೪; ಜಯದೇವ ಹೃದ್ರೋಗ ಸಂಸ್ಥೆಯಿಂದ ೫೨ ಲಕ್ಷ ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡಿ ದಾಖಲೆ ನರ‍್ಮಿಸಲಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನರ‍್ದೇಶಕ ಡಾ. ಮಂಜುನಾಥ್‌ ಹೇಳಿದ್ದಾರೆ.

ಜಯನಗರದ ಚಂದ್ರಗುಪ್ತಮರ‍್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ನಿಂದ 11ನೇ ರ‍್ಷದ ಸಮಾಜಸೇವಾ ಕರ‍್ಯಕ್ರಮದಲ್ಲಿ 10ಸಾವಿರ ಮಕ್ಕಳಿಗೆ 1.5 ಲಕ್ಷ ಉಚಿತ ನೋಟ್ ಪುಸ್ತಕಗಳು, ಕಲಿತಾ ಪರಿಕರಗಳ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಜಯದೇವ ಸಂಸ್ಥೆ ಮಾನವೀಯತೆ ಮತ್ತು ಹೃದಯ ವೈಶಾಲ್ಯದಿಂದ ಕರ‍್ಯನರ‍್ವಹಿಸುತ್ತಿದೆ. ಸೇವಾ ಮನೋಭಾವನೆಯಿಂದಾಗಿ ದಾಖಲೆ ನರ‍್ಮಿಸಲು ಸಾಧ್ಯವಾಗಿದೆ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಸೂತ್ರಗಳು. ಇದು ಕಂಪ್ಯೂಟರ್ ಲ್ಯಾಪ್ ಟಾಪ್ ಯುಗವಾಗಿ ಪರಿರ‍್ತನೆಯಾಗಿದ್ದು, ಮಕ್ಕಳು ಪೆನ್ನು ಬಳಸಿ ಬರೆದರೆ ಮಿದುಳಿಗೆ ಒಳ್ಳೆಯದು ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಪುಸ್ತಕ, ಪರಿಕರಗಳನ್ನು ಒದಗಿಸಿದರೆ ವಿದ್ಯಾದಾನ ಮಾಡಿದಂತಾಗುತ್ತದೆ. ಅವಶ್ಯಕತೆ ಇರುವ ಮಕ್ಕಳಿಗೆ ವಿದ್ಯರ‍್ಥಿ ವೇತನ ನೀಡಬೇಕು. ವಿದ್ಯರ‍್ಥಿಗಳು ಉತ್ತಮ ಅಂಕಗಳಿಸಿ ಸಮಾಜಕ್ಕೆ ಮಾದರಿಯಾಗಬೇಕು. ಜ್ಞಾರ‍್ಜನೆಗೆ ಶಿಕ್ಷಣವೇ ಮರ‍್ಗಾಗಿದೆ. ಶಿಕ್ಷಣ ಪಡೆದವರು ದೇಶ, ಭಾಷೆ ಮತ್ತು ನಮ್ಮ ಸಂಸ್ಕೃತಿ, ಸಂಪ್ರಾದಯ ಮರೆಯಬಾರದು ಎಂದು ಹೇಳಿದರು.

ಸಂಸದ ತೇಜಸ್ವಿ ಸರ‍್ಯ ಮಾತನಾಡಿ ಶಿಕ್ಷಣಕ್ಕೆ ಪ್ರೋತ್ಸಾಹ, ಸಹಕಾರ ನೀಡುವುದು ಮುಖ್ಯ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಶಿಕ್ಷಣ, ಗುರುಗಳ ಸರಿಯಾದ ಮರ‍್ಗರ‍್ಶನ ಲಭಿಸಿದರೆ ಉತ್ತಮ ಪ್ರಜೆಗಳಾಗಿ ಬೆಳಗುತ್ತಾರೆ ಎಂದು ಹೇಳಿದರು.

ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ ಸಮಾಜದಲ್ಲಿ ನೊಂದವರ ಮತ್ತು ಬಡವರ ಸೇವೆ ಮಾಡುವುದು ಅಗತ್ಯವಾಗಿದೆ. ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದ್ದು, ಇವರಿಗೆ ಉತ್ತಮ ಭವಿಷ್ಯ ನೀಡಬೇಕು ಎಂದರು.

ರಕ್ಷ ಫೌಂಡೇಷನ್ ಸಂಸ್ಥಾಪಕರು ಆದ ಶಾಸಕ ಸಿ.ಕೆ.ರಾಮಮರ‍್ತಿ ಮಾತನಾಡಿ, ರ‍್ಥಿಕವಾಗಿ ಹಿಂದುಳಿದವರು ಶಿಕ್ಷಣದಿಂದಲೂ ವಂಚಿತರಾಗಬಾರದು, ಶ್ರೀಮಂತರಿಗೆ ದೊರೆಯುವ ಶಿಕ್ಷಣ ಸೌಲಭ್ಯ ಬಡ ಮಕ್ಕಳಿಗೂ ದೊರೆಯುವಂತಾಗಬೇಕು ಎಂದರು.

ಇದೇ ಸಂರ‍್ಭದಲ್ಲಿ ಅವರು ಜಯದೇವ ಆಸ್ಪತ್ರೆಗೆ 2ಲಕ್ಷ ರೂಪಾಯಿ ದೇಣಿಗೆ ನೀಡಿದರು. ಅಂತರಾಷ್ಟ್ರೀಯ ಅಂಧರ ಮಹಿಳಾ ಕ್ರೀಡಾಪಟುಗಳಾದ ಗಂಗವ್ವ, ಮತ್ತು ಜ್ಯೋತಿ ಅವರನ್ನು ಸನ್ಮಾನಿಸಿದರು.

ಕರ‍್ಯಕ್ರಮದಲ್ಲಿ ಆರ್.ಎಸ್.ಎಸ್‌ ಸಹ ಕರ‍್ಯನರ‍್ವಾಹಕರಾದ ತಿಪ್ಪೇಸ್ವಾಮಿ, ಶಾಸಕ ಸತೀಶ್ ರೆಡ್ಡಿ, ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಸೋಮಶೇಖರ್, ನಾಗರತ್ನ ರಾಮಮರ‍್ತಿರವರು, ಗೋವಿಂದನಾಯ್ಡು, ಚಂದ್ರಶೇಖರ್ ರಾಜು, ಮಂಜುನಾಥ್ ರೆಡ್ಡಿ ಮತತಿತರರು ಉಪರಸ್ಥಿತರಿದ್ದರು.